






ಹಾಗೂ ಉಪನ್ಯಾಸ ನಡೆಯಿತು.



ವಿವಿಧ ಶಾಲಾ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಸಾಧನಾ ಯೋಗ ಕೇಂದ್ರದ ಮುಖ್ಯಸ್ಥರಾದ ಶ್ರೀಧರ್ ಅವರು ಹಾಗೂ ಕಾರ್ಯಕ್ರಮಕ್ಕೆ ಬಹುಮಾನ ಪ್ರಯೋಜಕರಾದ ಶ್ರೀಯುತ ಪಾಪಯ್ಯ ಶೆಟ್ಟಿ ಬಳ್ಳಾರಿ ಅವರು ಭಾಗವಹಿಸಿದ್ದರು.
ನಿರ್ಣಾಯಕರಾಗಿ ಶ್ರೀಮತಿ ಮಾಧವಿ ಲತಾ ಹಾಗೂ ಶ್ರೀಮತಿ ಮಂಗಳಗೌರಿ ಇವರು ನಡೆಸಿಕೊಟ್ಟರು.
ಜಿಲ್ಲಾ ಸಂಚಾಲಕರಾದ ಗುರುಪಾದ ಹೆಗಡೆ ಕಾರ್ಯಕ್ರಮ ನಿರ್ವಹಿಸಿದರು.







ಅರ್ಜುನನ್ನು ನಿಮಿತ್ತವಾಗಿರಿಸಿ ಸಮಸ್ತ ಲೋಕಕ್ಕೆ ಶ್ರೀಕೃಷ್ಣ ನೀಡಿದ ಸಂದೇಶವನ್ನು ಅನುಸರಿಸಬೇಕು. ಸುಖ-ದುಃಖ ಎರಡಕ್ಕೂ ಮನಸ್ಸು ಕಾರಣ ಹಾಗಾಗಿ ಸುಖ ದುಃಖದಲ್ಲಿ ಸಮಚಿತ್ತವನು ಜೀವನದಲ್ಲಿ ಎಲ್ಲವನ್ನೂ ಸಾಧಿಸಬಹುದು. ಮನಸ್ಸು ಸುಸಂಸ್ಕೃತ ಗೊಳ್ಳಬೇಕಾದರೆ ಗೀತಾಚಾರ್ಯ ಹೇಳಿದ ಗೀತೋಕ್ತಿಗಳನ್ನು ಜೀವನದಲ್ಲಿ ಪಾಲಿಸಬೇಕು ಎಂಬುದಾಗಿ ಜಗದ್ಗುರು ಮಧ್ವಾಚಾರ್ಯ ಮೂಲ ಮಹಾಸಂಸ್ಥಾನ ವಿಜಯಧ್ವಜ ತೀರ್ಥ ಪೀಠ ಶ್ರೀ ಚಿತ್ರಾಪುರ ಮಠಾಧೀಶರಾದ ಶ್ರೀಪಾದಂಗಳವರು ಅಭಿಪ್ರಾಯ ಪಟ್ಟರು. ಶ್ರೀ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನ ಶಾರದಾ ಸಮೂಹ ಶಿಕ್ಷಣ ಸಂಸ್ಥೆಗಳ ಆಶ್ರಯದಲ್ಲಿ ಜಿಲ್ಲಾ ಮಟ್ಟದ ಭಗವದ್ಗೀತಾ ಸ್ಪರ್ಧೆಗಳನ್ನು ಉದ್ಘಾಟಿಸಿ ಪತ್ರವೋ ಪುಷ್ಪವೋ ಯಾವುದನ್ನಾದರೂ ಪ್ರಾಪ್ತಿಮಾಡಿಕೊಳ್ಳಬಹುದು, ವೇದ ಶಾಸ್ತ್ರ ಪುರಾಣಗಳ ಸಾರದಂತಿರುವ ಭಗವದ್ಗೀತೆ ಸರ್ವರಿಂದಲೂ ಪಠಿಸುವಂತಾಗಬೇಕೆಂದು ನುಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಸಂಸ್ಥೆಗಳ ಅಧ್ಯಕ್ಷರಾದ ಡಾ. ಎಂ.ಬಿ.ಪುರಾಣಿಕರು ಗೀತೆಯಲ್ಲಿ ಅಡಕವಾಗಿದೆ. ಮಾನಸಿಕ ನೆಮ್ಮದಿಯನ್ನು ಪ್ರಾಪ್ತಿ ಮಾಡಿಕೊಳ್ಳಲು ಭಗವದ್ಗೀತೆಯ ಸಾರವನ್ನು ಪ್ರತಿಯೊ ಭಾರತೀಯನು ಅರಿಯುವಂತಾಗಬೇಕು ಎಂದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಸಂಸ್ಥೆಗಳ ಕಾರ್ಯದರ್ಶಿ ಶ್ರೀ ಪ್ರದೀಪ ಕುಮಾರ ಕಲ್ಕೂರ ಸಂಘದ ಗೌರವಾಧ್ಯಕ್ಷರಾದ ಶ್ರೀ ವಾಸುದೇವ ರಾವ್ ಕಟೀಲು ಮುಂತಾದವರು ಉಪಸ್ಥಿತರಿದ್ದರು

