ಸ್ವರ್ಣವಲ್ಲೀ ಉಭಯ ಶ್ರೀಗಳಿಂದ ಅತ್ಮಲಿಂಗಕ್ಕೆ ಪೂಜೆ

posted in: Press Note/News | 0

ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದ ಉಭಯ ಶ್ರೀಗಳಾದ ಶ್ರೀ ಗಂಗಾಧೇಂದ್ರ ಸರಸ್ವತೀ ಮತ್ತು ಆನಂದಬೋಧೇಂದ್ರ ಸರಸ್ವತೀ ಸ್ವಾಮಿಗಳು ಗೋಕರ್ಣಕ್ಕೆ ಆಗಮಿಸಿ ಮಹಾಗನಪತಿ,ಮಹಾಬಲೇಶ್ವರನ ಆತ್ಮಲಿಂಗಕ್ಕೆ ಪೂಜೆ ಸಲ್ಲಿಸಿ ಪಾರ್ವತಿಯ ದರ್ಶನ ಪಡೆದರು. Read More

ಸಕಾಲದಲ್ಲಿ ವಿವಾಹ ನೆರವೇರಿಸಿ- ಸ್ವರ್ಣವಲ್ಲೀ ಶ್ರೀ

posted in: Press Note/News | 0

ಯಲ್ಲಾಪುರ ತಾಲೂಕಿನ ಚಂದುಗುಳಿಯಲ್ಲಿ ಸ್ವರ್ಣವಲ್ಲೀ ಗಂಗಾಧರೇಂದ್ರ ಸರಸ್ವತೀ ಸ್ವಾಮಿಜಿ ಸಿದ್ಧಿವಿನಾಯಕ ದೇವಸ್ಥಾನದ ಅಷ್ಟಬಂಧ ಮಹೋತ್ಸವದ ಕಾರ್ಯಕ್ರಮ ಉದ್ಘ್ಹಾಟಿಸಿದರು. Read More

ಯಕ್ಷಗಾನ,ತಾಳಮದ್ದಲೆಯಲ್ಲಿ ತತ್ವ ನೀಡಿದರೆ ಸನ್ಮಾರ್ಗ; ಸ್ವರ್ಣವಲ್ಲೀ ಶ್ರೀ

posted in: Press Note/News | 0

ಯಕ್ಷ ಸಂಭ್ರಮ ಟ್ರಸ್ಟ್ ಹಮ್ಮಿಕೊಂಡ ದಶಕಂ ಧರ್ಮ ಲಕ್ಷಣಂ ತಾಳಮದ್ದಲೆ ದಶಾಹದ ಹಿನ್ನೆಲೆಯಲ್ಲಿ ಶ್ರೀ ಶ್ರೀಗಳವರು ಆಶೀರ್ವಚನ ನೀಡಿದರು. Read More

ಶರನ್ನವರಾತ್ರಿ; ಸ್ವರ್ಣವಲ್ಲೀ ಶ್ರೀ ಆಶೀರ್ವಚನ

posted in: Press Note/News | 0

ಶ್ರೀ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದಲ್ಲಿ ವಿಜಯ ದಶಮಿ ಹಿನ್ನಲೆಯಲ್ಲಿ ಭಕ್ತರನ್ನು ಉದ್ದೇಶಿಸಿ ಶ್ರೀ ಶ್ರೀಗಳವರು ಆಶೀರ್ವಚನ ನೀಡಿದರು. Read More

ಸ್ವರ್ಣವಲ್ಲೀ ಮಠದಲ್ಲಿ ದೇವಿಯ ಆರಾಧನೆ ಆರಂಭ

posted in: Press Note/News | 0

ಶ್ರೀ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದಲ್ಲಿ ಸರ್ವರ ಇಷ್ಟಾರ್ಥ ಸಿದ್ಧಿಸುವ ದೇವಿಯ ಆರಾಧನೆ ಆರಂಭಗೊಂಡಿತು. ಶ್ರೀಮದ್ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳ ಹಾಗೂ ಅವರ ಕರಕಮಲ ಸಂಜಾತರಾದ ಶ್ರೀಮದ್ ಆನಂದಬೋಧೇಂದ್ರ ಸರಸ್ವತೀ ಸ್ವಾಮಿಗಳ ದಿವ್ಯ ಉಪಸ್ಥಿತಿಯಲ್ಲಿ ನವರಾತ್ರಿ ವ್ರತಾಚರಣೆಯ ಅಂಗವಾಗಿ ನಡೆಯುವ ಎಲ್ಲಾ ವೈದಿಕ ಕಾರ್ಯಕ್ರಮಗಳನ್ನು ಮಹಾಸಂಕಲ್ಪದ ಮೂಲಕ ಆರಂಭಿಸಲಾಯಿತು. ಪ್ರತಿನಿತ್ಯವೂ ಉಭಯ ಶ್ರೀಗಳು ಶ್ರೀ ಮಾತೆಯ ವಿಶೇಷ ಪೂಜೆಯನ್ನು , ಶ್ರೀಚಕ್ರಾರ್ಚನೆಯನ್ನು, ಮಹಾಮಂಗಳಾರತಿಯನ್ನು ನೆರವೇರಿಸುತ್ತಾರೆ. ವೇದಗಳ ಪಾರಾಯಣ, ಅಧ್ಯಾತ್ಮ ರಾಮಾಯಣ ಪಾರಾಯಣ, ದೇವೀ ಭಾಗವತ ಪಾರಾಯಣ, ಸಪ್ತಶತೀ ಪಾರಾಯಣ, ಶತರುದ್ರಾಭಿಷೇಕ ಈ ಎಲ್ಲಾ ವೈದಿಕ ಕಾರ್ಯಕ್ರಮಗಳು ಆರಂಭಗೊಂಡವು. ನಿತ್ಯವೂ ಅನೇಕ ವಿದ್ವಾಂಸರುಗಳಿಂದ ಈ ಎಲ್ಲಾ ಕಾರ್ಯಕ್ರಮಗಳು ನಡೆಯುತ್ತವೆ. ದೇವೀ ಆರಾಧನೆಗೆ ಪ್ರಶಸ್ತವಾದ ಈ ಪುಣ್ಯತಮವಾದ ಪರ್ವದಲ್ಲಿ, ದೇವೀ ಆರಾಧನೆಯನ್ನು ಅನೇಕ ವರ್ಷಗಳಿಂದ, ಅನೇಕ ಯತಿಗಳು ನಿಷ್ಠೆಯಿಂದ ನಡೆಸಿಕೊಂಡು ಬಂದ ದಿವ್ಯ ಕ್ಷೇತ್ರವಾಗಿದೆ. Read More

ಸ್ವರ್ಣವಲ್ಲೀ ಉಭಯಶ್ರೀಗಳವರ ಚಾತುರ್ಮಾಸ್ಯ ಸೀಮೋಲ್ಲಂಘನ

posted in: Press Note/News | 0

ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀಮದ್ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳು ಹಾಗೂ ಅವರ ಕರಕಮಲ ಸಂಜಾತರದ ಶ್ರೀ ಶ್ರೀಮದ್ ಆನಂದಬೋಧೇಂದ್ರ ಸರಸ್ವತೀ ಸ್ವಾಮಿಗಳವರು ಚಾತುರ್ಮಾಸ್ಯ ವ್ರತ ಸಮಾಪ್ತಿ ಅಂಗವಾಗಿ ಶಾಲ್ಮಲಾ ತೀರದಲ್ಲಿ ಗಂಗಾಪೂಜೆ ನೆರವೇರಿಸಿ ಸೀಮೋಲ್ಲಂಘನಗೈದರು.