ಮೂರು ಕಡೆ ಮೂರ್ಖವಾಗುವ ಮನಸ್ಸು

posted in: Gurubodhe | 0

ನಮ್ಮ ನಿಜಸ್ವರೂಪವನ್ನೇ ಮನಸ್ಸು ಗ್ರಹಿಸುವುದಿಲ್ಲ. ಶರೀರವೇ ನಾವು ಎಂದು ಅಜ್ಞಾನಿಗಳಾದ ನಾವೆಲ್ಲಾ ಕಾಣುತ್ತೇವೆ. ಈ ಶರೀರ ಹುಟ್ಟುವುದಕ್ಕಿಂತ ಮುಂಚೆಯೂ ನಾನು ಇದ್ದದ್ದನ್ನು ಮನಸ್ಸು ಗ್ರಹಿಸುವುದಿಲ್ಲ. ಅಷ್ಟೇ ಏಕೆ, ಹಿಂದೆ ತಾಯಿಯ ಉದರದಲ್ಲಿದ್ದು ಹುಟ್ಟಿಬಂದದ್ದನ್ನು ನಮ್ಮ ಇಂದಿನ ಮನಸ್ಸು ಗ್ರಹಿಸುವುದಿಲ್ಲ. ಈ ರೀತಿಯಲ್ಲಿ ಮನಸ್ಸು ವಸ್ತುಸ್ಥಿತಿಯನ್ನು ಗ್ರಹಿಸಲಾರದೇ ಮೂರ್ಖನಂತಾಗಿಬಿಡುತ್ತದೆ. ಸಂಸ್ಕಾರ ಇಲ್ಲದಿರುವಿಕೆಯೇ ಇದಕ್ಕೆ ಕಾರಣ. Read More

ದೇವರಲ್ಲಿ ಆನಂದಿಸುವವನು ಎಲ್ಲಕಡೆ ಗೆಲ್ಲುತ್ತಾನೆ

posted in: Gurubodhe | 0

ಮನುಷ್ಯನಿಗೆ ಎರಡು ರೀತಿಯ ಆನಂದದ ಅನುಭವಕ್ಕೆ ಅವಕಾಶವಿದೆ. ಇಂದ್ರಿಯಗಳ ಮೂಲಕ ವಿಷಯಸುಖವೆಂಬ ಆನಂದ ಮತ್ತು ವಿಷಯಸುಖಗಳಿಂದ ದೂರವಿರುವ ಮನಸ್ಸಿನಿಂದ ದೇವರ ಚಿಂತನೆಯಲ್ಲಿ ಸಿಗುವ ಆನಂದ. ವಿಷಯಸುಖಗಳಲ್ಲಿಯೇ ನಿಂತವನು ಜೀವನದಲ್ಲಿ ಸೋಲುತ್ತಾನೆ. ಯಾಕೆಂದರೆ ಅವನ ಶರೀರ, ಇಂದ್ರಿಯ, ಮನಸ್ಸುಗಳು ದುರ್ಬಲಗೊಳ್ಳುತ್ತವೆ. ಪರದಲ್ಲಿ ಸದ್ಗತಿಯ ವಿಷಯವಂತೂ ಅವನಿಗೆ ತುಂಬಾ ದೂರವೇ ಆಗಿದೆ. ದೇವರ ಪೂಜಾ-ಜಪ-ಧ್ಯಾನಗಳಲ್ಲಿ ಸಹಜವಾದ ಆನಂದವನ್ನು ಪಡೆಯುವವನು ಗೆಲ್ಲುತ್ತಾನೆ. Read More

ಚಾತುರ್ಮಾಸ್ಯ – ಯುಕ್ತವಾದ ಸಂಚಾರ

posted in: Gurubodhe | 0

ಶರೀರವೆಂಬ ರಥಕ್ಕೆ ಕಟ್ಟಲ್ಪಟ್ಟ ಇಂದ್ರಿಯಗಳೆಂಬ ಹತ್ತು ಕುದುರೆಗಳಲ್ಲಿ ಪಾದಗಳು ಸಂಚಾರದ ಮುಖ್ಯಸಾಧನಗಳು. ಸಂಚರಿಸುವ ಎಲ್ಲಾ ಪ್ರಾಣಿಗಳಿಗೂ ಒಂದಲ್ಲಾ ಒಂದು ರೀತಿಯಲ್ಲಿ ಇವು ಇರುತ್ತವೆ. ನಮ್ಮನ್ನು ಒಂದು ವಾತಾವರಣದಿಂದ ಎನ್ನೊಂದು ವಾತಾವರಣಕ್ಕೆ ಕೊಂಡೊಯ್ಯುವ ಮೂಲಕ ನಮ್ಮ ಮನಸ್ಸಿನಲ್ಲಿ ಪಾದಗಳು ಬದಲಾವಣೆಯನ್ನು ತರುತ್ತವೆ. Read More

ದೇವರು ಕೂಡ ನಿದ್ದೆ ಮಾಡುತ್ತಾನೆಯೇ?

posted in: Gurubodhe | 0

ಎಲ್ಲ ಪ್ರಾಣಿಗಳಿಗೆ ಶ್ರಮ ಜಾಸ್ತಿಯಾದಾಗ ನಿದ್ರೆ ಬರುತ್ತದೆ. ವಿಶ್ರಾಂತಿಯಲ್ಲಿ ಶ್ರಮ ಪರಿಹಾರವಾಗುತ್ತದೆ. ಭಗವಂತನಿಗೆ ಶ್ರಮವಿಲ್ಲ, ನಿದ್ರೆಯಿಂದ ಶ್ರಮದ ಪರಿಹಾರವೂ ಇಲ್ಲ. ಪಂಚ ಮಹಾಭೂತಗಳ ಕಾರ್ಯವಾಗಿರುವ ಶರೀರಕ್ಕೆ ಮತ್ತು ಇಂದ್ರಿಯಗಳಿಗೆ ಶ್ರಮ ಇರುತ್ತದೆ. ಮನಸ್ಸು ಕೂಡ ಪಂಚ ಮಹಾಭೂತಗಳಿಂದಲೇ ಆದುದರಿಂದ ಅದಕ್ಕೆ ಶ್ರಮವಿರುತ್ತದೆ. ಭಗವಂತನಿಗೆ ಪಂಚಮಹಾಭೂತಗಳ ದೇಹೇಂದ್ರಿಯಗಳಿಲ್ಲ. ಅವನ ಮೂಲಸ್ವರೂಪದಲ್ಲಿ ಅವನನ್ನು ನೋಡಿದರೆ ಅವನಿಗೆ ಪಂಚ ಮಹಾಭೂತಗಳ ಶರೀರೇಂದ್ರಿಯಗಳಿಲ್ಲ. Read More