ಈ ಭೂಮಿಯ ಪರಿಮಳ

posted in: Gurubodhe | 0

ಭೂಮಿಯಲ್ಲಿ ಸುಗಂಧ ಸಹಜವಾಗಿ ಬರುವಂತೆ ನಮ್ಮ ದೇಶದ ಜನತೆಯ ಅಂತರಂಗಗಳಲ್ಲಿ ಅನೇಕ ಒಳ್ಳೆಯ ಮೌಲ್ಯಗಳು ಸಹಜವಾಗಿ ಇವೆ. ಇದೇ ಮನಸ್ಸೆಂಬ ಮಣ್ಣಿನ ಸಹಜ ಸುಗಂಧ. ಆದರೆ ಈಗ ಈ ಸುಗಂಧ ಅಧರ್ಮದಿಂದ ಹಾಳಾಗುತ್ತಿದೆ, ಅಧರ್ಮವೆಂಬ ದುರ್ಗಂಧ ಮನಸ್ಸೆಂಬ ಮಣ್ಣಿನಲ್ಲಿ ಬರುತ್ತಿದೆ. ಇದಕ್ಕೆ ಬೇರೆ ದೇಶಗಳ ಚಿಂತನೆಗಳು ಮನಸ್ಸುಗಳಲ್ಲಿ ಹೊಕ್ಕಿವೆ. ಹಳ್ಳಿಗಳಲ್ಲಿರುವ ಕೃಷಿ ಮತ್ತು ಗೋ ಸಂರಕ್ಷಣೆ ಮುಂತಾದ ಜೀವನ ಪದ್ಧತಿಗಳು ಮಾಯವಾಗುತ್ತಿವೆ. Read More